ದ್ರುವಿನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಬಾಬುರೆಡ್ಡಿ ಅವರು ನಿರ್ಮಿಸುತ್ತಿರುವ ‘ಟೈಸನ್ ಚಿತ್ರಕ್ಕಾಗಿ ಯೋಗರಾಜ್ಭಟ್ ಅವರು ಬರೆದಿರುವ ‘ಕಣ್ಣಲ್ಲೇ ಕುಂಟೆಬಿಲ್ಲೆ‘ ಹಾಗೂ ರಾಮ್ನಾರಾಯಣ್ ಅವರು ಬರೆದಿರುವ ‘ಅವನ್ಯಾರಂತಾನೆ ಗೊತ್ತಿಲ್ಲ‘ ಎಂಬ ಎರಡು ಹಾಡುಗಳ ಚಿತ್ರೀಕರಣ ಮಲೇಷಿಯಾದಲ್ಲಿ ನಡೆದಿದೆ. ‘ಕಣ್ಣಲ್ಲೇ‘ ಹಾಡಿಗೆ ಆರ್.ಗಣೇಶ್ನಾರಾಯಣ್ ಸಂಗೀತ ನೀಡಿದ್ದು, ವಿಜಯಪ್ರಕಾಶ್ ಹಾಗೂ ಅಪೂರ್ವ ಶ್ರೀಧರ್ ಹಾಡಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನದ ‘ಅವನ್ಯಾರಂತಾನೆ‘ ಹಾಡನ್ನು ಟಿಪ್ಪು, ಅನುರಾಧಾಭಟ್ ಹಾಡಿದ್ದಾರೆ. ಈ ಎರಡು ಗೀತೆಗಳಿಗೆ ರಾಮು ನೃತ್ಯ ನಿರ್ದೇಶನ ಮಾಡಿದ್ದಾರೆ.
ರಾಮ್ನಾರಾಯಣ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿಗಿಫ಼್ಟ್, ಗಣೇಶ್ ಹಾಗೂ ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ, ಹರ್ಷ, ಮುರುಳಿ, ರಾಮು ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸತೀಶ್ಚಂದ್ರ ಶೆಟ್ಟಿ.
ವಿನೋದ್ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಗಾಯಿತ್ರಿ ಅಯ್ಯರ್. ರವಿಕಾಳೆ, ಸುಮನ್, ಶ್ರೀನಿವಾಸಮೂರ್ತಿ, ವಿನಯಪ್ರಸಾದ್, ಚಿಕ್ಕಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.